Thursday, November 01, 2007


ಕನ್ನಡ ಜನರಲ್ಲದೆ ಕನ್ನಡವನು
ಉಳಿಸುವವರಾರೈ ಬೆಳೆಸುವರಾರೈ
ಬಳಸುವರೂ ತಾವಾರಿಹರೈ?
-ಪು.ತಿ.ನ

ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರಿಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು..

-ಅಡಿಗರು

ಈ ಸಾಲುಗಳಿಗೆ ಅರ್ಥ ಕಲ್ಪಿಸುವುದ್ಯಾವಾಗ?

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.