ಮಾನ್ಯರೇ,
ಎಸ್. ಒ. ಎಸ್. ಮಕ್ಕಳ ಗ್ರಾಮದ ಸಹಾಯ ನಿಧಿಯ ಉದ್ದೇಶದಿಂದ ಭಾವನೆಗಳಿಗೆ ಬಣ್ಣದ ಚಿತ್ತಾರ ಬೆರಸಿ, ಒಡಮೂಡಿದ ಕಲಾಕೃತಿಗಳನ್ನು ಕಣ್ತುಂಬ ನೋಡಿ, ಮನತುಂಬಾ ಹರಸುವಿರೆಂಬ ಆಶಯದೊಂದಿಗೆ ನಿಮ್ಮನ್ನು ನಮ್ಮ ಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇನೆ.
ಚಿತ್ರ ಪ್ರದರ್ಶನ : ಸ್ತ್ರೀತ್ವದ ಚಿತ್ರ ವ್ಯಾಖ್ಯೆಶಿಲ್ಪ
ಕಲಾಕೃತಿಗಳ ಪ್ರದರ್ಶನ : ಬಾಲಕಾಂಡದ ಮೋಜು ಹಾಗೂ ಕಲ್ಪನೆ
ಉದ್ಘಾಟಕರು : ಶ್ರೀ ಕೆ.ವಿ. ಸುಬ್ರಮಣ್ಯಂ,
ಖ್ಯಾತ ವಿಮರ್ಶಕರು
ಅತಿಥಿಗಳು : ಶ್ರೀ ಎಂ. ಕೆ. ಲೋಕೇಶ್,
ನಿರ್ದೇಶಕರು,
ಎಸ್.ಓ.ಎಸ್. ಮಕ್ಕಳ ಗ್ರಾಮ.
ಜುಲೈ 3 ರ, ಬೆಳಿಗ್ಗೆ 11 ಗಂಟೆಗೆ
ಚಿತ್ರಕಲಾ ಪರಿಷತ್, ಗ್ಯಾಲರಿ -1,
ಕುಮಾರ ಕ್ರಪ ರಸ್ತೆ, ಬೆಂಗಳೂರು-560001
ನನ್ನೊಂದಿಗೆ ಕುಂಚಕಲಾವಿದರಾದ ಸಿ.ಎಸ್.ಶಶಿಧರ್, ಜೆ. ಕಡೂರ್, ರಾಘ್ ಪುತ್ತೂರ್ ಹಾಗೂ ಶಿಲ್ಪಿ ಡಿ. ರಂಗಸ್ವಾಮಿ ನಿಮ್ಮ ಬರುವಿಕೆಗಾಗಿ ದಾರಿ ಕಾಯುತ್ತಿರುತ್ತೇವೆ.
ಪ್ರದರ್ಶನವು ದಿನಾಂಕ 3,4,5 ಹಾಗೂ 6 ರ ಜುಲೈ 2008 ಬೆಳಗ್ಗೆ 10 ರಿಂದ ಸಂಜೆ 7 ರ ವರೆಗೆ ತೆರೆದಿರುತ್ತದೆ.
ನಿಮ್ಮವ,
ಪ್ರಮೋದ್. ಪಿ. ಟಿ